ಪೆಟ್ರೋಲ್ ಇಲ್ಲದೆ ಸೊರಗಿದ್ದ ನನ್ನ ಇನಿಯ ( ನನ್ನ ಬೈಕ್ನ ಹೆಸರು) ಪಕ್ಕೆಗೆ ಬಲವಾಗಿ ಒದ್ದು ಕಷ್ಟ ಪಟ್ಟು ಸ್ಟಾಟ್ ಮಾಡಿ ಕುವೆಂಪು ವಿ.ವಿ ಯ ಮೆಜೆಸ್ಟಿಕ್ ಎಂದೇ ಕರೆಯುವ ಬಸ್ ಸ್ಟಾಂಡ್ ಕಡೆ ಹೊರಟಾಗ ಆಗಲೇ ಸಂಜೆ ೫-೧೫ ಆಕಾಶ ಆಗಲೆ ಕೆಂಪು , ಕಪ್ಪು ಮಿಶ್ರಿತ ಬಣ್ಣದಿಂದ ಮಂಕಾಗಿತ್ತು. ಸೂರ್ಯ ಪಶ್ಚಿಮದಲ್ಲಿ ಯಾವುದೊ ನಿರಾಸೆಯಲ್ಲಿ ದಿನದ ಬೆಳಕಿಗೆ ವಿದಾಯ ಹೇಳಲು ಅಣಿಯಾಗುತ್ತಿದ್ದ . ಹಕ್ಕಿಗಳು ಗೊಡಿನ ಕಡೆ ಮುಖ ಮಾಡಿ ಹೊರಡುತ್ತಿದ್ದವು . ಆಗ ತಾನೆ ನೈಟ್ ಡ್ಯೂಟಿಗೆ ನಿಯೊಜನೆಗೊಂಡ ಸೆಕ್ಯುರಿಟಿಗಳನ್ನು ಸಾಲಾಗಿ ನಿಲ್ಲಿಸಿ ಅವರಿಗೆ ಡ್ಯೂಟಿ ವಿವರಿಸುತ್ತಿದ್ದ ಸೊಪರ್ ವೈಸರ್ ನನ್ನೆಡೆ ನೋಡಿ ಮುಗುಳ್ನಕ್ಕಾಗ ಆ ನಗುವಿನಲ್ಲಿ ಯಾವುದೊ ಆಕರ್ಷಣೆ ಇರುವಂತೆ ತೊರಿತು. ಅಷ್ಟರಲ್ಲಾಗಲೇ ಹಾಸ್ಟೆಲಿನಿಂದ ಹುಡುಗಿಯರ ದಂಡು ಮೆಜೆಸ್ಟಕ್ ಕಡೆ ಮುಖ ಮಾಡಿತ್ತು. ಅವರನ್ನೆ ಹಿಂಬಾಲಿಸುತ್ತಿದ್ದ ಹುಡುಗರ ದಂಡು ಬಸ್ ಸ್ಟಾಂಡ್ ಕಡೆ ತೆವಳುತ್ತಿತ್ತು. ಆ ಎರಡು ಗುಂಪುಗಳನ್ನು ತದೇಕಚಿತ್ತದಿಂದ ನೊಡುತ್ತಿದ್ದ ಕೆಳಗಿನ ಲೊಕಲ್ ಹುಡುಗರು ಸ್ಟಾಂಡಿನ ಎದುರಿನ ಕಟ್ಟೆಗಳ ಮೇಲೆ ಜಮಾಯಿಸಿ ಯಾವುದೊ ಅರ್ಥವಾಗದ ಭಾಷೆಯಲ್ಲಿ ಗುಸು ಗುಸು ಶುರುಮಾಡಿದ್ದರು. ಅದನ್ನೆ ಗಮನಿಸುತ್ತಾ ಮುಂದೆ ಹೊದರೆ ಆಗ ತಾನೆ ವ್ಯಪಾರಕ್ಕೆ ಅಣಿಯಾಗುತ್ತಿದ್ದ ಗೊಭಿ , ಪಾನಿ ಪುರಿ , ಮಂಡಕ್ಕಿಯ ವ್ಯಪಾರಿಗಳು ತಮ್ಮ ಗಿರಾಕಿಗಳ ನಿರಿಕ್ಷೇಯಲ್ಲೆ ನಿಂತಿರುವಂತೆ ತೊರುತ್ತಿದ್ದರು.
ಆಗ ಅಕಸ್ಮಾತ್ ಕಣ್ಣಿಗೆ ಬಿದ್ದವರು ಬೆಳಗ್ಗೆ ಇದ್ದಕ್ಕಿಂದಂತೆ ಎದುರಾಗಿ ನೀವು ಲೇಖನ ಬರೆಯುತ್ತಿರಂತೆ ! ನನ್ನ ಗೆಳತಿ ಹೇಳಿದಳು. (ಅನ್ನೊ ರೆಕಮೆಂಡ್ ಜೋತೆಗೆ ) ನಾನು ಬರೆಯಬೇಕು ಅಂತ ಇದ್ದೆನೆ. ಆದರೆ ಹೇಗೆ ಬರೆಯುವುದು ಎಂದು ಕೇಳಿ, ಬಸ್ ಸ್ಟಾಂಡ್ ಬಗ್ಗೆ ಬರೆಯುತ್ತೆನೆ. ಎಂಬ ಹೊಂ ವರ್ಕ್ ತೆಗೆದುಕೊಂಡು ಹೋದ ದಾವಣಗೆರೆಯ ಇಂಗ್ಲಿಷ್ ವಿಬಾಗದಲ್ಲಿ ಎಂ.ಎ ಮಾಡುತ್ತಿರುವ ಹುಡುಗಿ. ಯಾರೊ ನಾಲ್ಕು ಹುಡುಗಿಯರ ಜೋತೆ ಒಂದು ಸ್ವಿಟ್ ಸ್ಟಾಲ್ ಮುಂದೆ ಜಮಾಯಿಸಿ ಚೌಕಾಸಿಯಲ್ಲಿರುವಂತೆ ಕಾಣುತ್ತಿದ್ದರು. ಅವರಲ್ಲಿಯೆ ಇದ್ದ ಹುಡುಗಿಯೊಬ್ಬಳು ಯಾವುದೋ ಮುಗ್ದತೆಯಲ್ಲಿ ಜೀವನದ ಪ್ರಮುಖ ವಿಷಯವನ್ನು ಎಲ್ಲರಿಗೂ ಹೇಳುವ ಪ್ರಯತ್ನದಲ್ಲಿರುವಂತೆ ಕಂಡಾಗಲೆ ಜೋರಾಗಿ ಬಂದ ಬಸ್ಸು ಅವರ ಮುಖದ ಮೇಲೆಲ್ಲ ಧೂಳು ಹಾರಿಸಿ ನಕ್ಕು ಮುಂದಕ್ಕೆ ಹೊದಂತಾಯಿತು. ಮರುಕ್ಷಣವೇ ಎಲ್ಲರ ಚುನ್ನಿ ಅವರುಗಳ ಬಾಯಿ ಮುಖ ಮುಚ್ಚಿಯಾಗಿತ್ತು. ಪಾಪ ಜೀವನದ ಯಾವುದೊ ಘಟನೆಯನ್ನು ಹೇಳಲು ಹೊರಟಿದ್ದ ಹುಡುಗಿಯ ಬಾಯಿ ಮುಚ್ಚಿಸಿದ ಬಸ್ ಮೇಲೆ ನನಗೆ ಕೊಪ ಬರುತ್ತಿತ್ತು. ಬಸ್ ಸ್ಟಾಂಡ್ ಬಗ್ಗೆ ಲೇಖನ ಬರೆಯಲು ಹೊರಟ ಹುಡುಗಿಯ ಅವಸ್ಥೆ ನೋಡಿ ನಗುತ್ತಾ ಷ್ರೈಡ್ ರೈಸ್ ಗಾಡಿಯ ಹತ್ತಿರ ಹೋಗಿ ಖರವಾದ ರೈಸ್ಗೆ ಅರ್ಡರ್ ಮಾಡುವ ಹೊತ್ತಿಗೆ ಸರಿಯಾಗಿ , ಅದೇ ಗಾಡಿಯಲ್ಲಿ ಕೆಲಸ ಮಾಡುವ ೮-೧೦ ವರ್ಷದ ಹುಡುಗನಿಗೆ ವಿಪರಿತವಾದ ಜ್ವರ , ನೆಗಡಿ , ಕೆಮ್ಮು ಇರುವುದು ನನ್ನ ಗಮನಕ್ಕೆ ಬರತೊಡಗಿತು. ಆದರೂ ಅವನು ಕೆಮ್ಮುತ್ತಲೆ ಕೆಲಸ ಮಾಡುತ್ತಿದ್ದ. ಆಗ ತಾನೆ ಕೆಲಸ ಮುಗಿಸಿ ಅಲ್ಲಿಗೆ ಬಂದ ಆತನ ತಾಯಿ ಈಗ ಹೇಗಿದ್ದಿಯ ನನ್ನ ಮಾತೆ ಕೆಳಲ್ಲ ಅಣ್ಣಾ ! ಮಳೆಯಲ್ಲಿ ನೆನೆಯುತ್ತಾನೆ. ಈಗ ನೋಡು ಅಂತ ತಲೆ ಸವರಿ ಗಾಡಿಯ ಒನರ್ಗೆ ಹೇಳಿದಾಗ. ಆತ ಯಾವುದೊ ನಿರ್ಲಕ್ಷ್ಯದಲ್ಲಿ ಹೌದು ಹೌದು ಎಂದು ತಲೆಯಾಡಿಸಿದುದು ಕಾಣಿಸಿತು . ಆಗ ಇದೇ ಜಾಗದಲ್ಲಿ ಒನರ್ನ ಮಗನೆ ಇದ್ದಿದ್ದರೆ ಆತನ ಪ್ರತಿಕ್ರಿಯೇ ಹೇಗಿರುತ್ತಿತ್ತು ಎಂದು ನೆನೆದು ನನ್ನ ಮನಸ್ಸು ಸುಮ್ಮನಾಯಿತು. ಅಷ್ಟರಲ್ಲಾಗಲೇ ಹುಷಾರಿಲ್ಲದ ಮಗನಿಗೆ ರಜಾ ಸಿಗಬಹುದು ಎಂದು ನಿರಿಕ್ಷಿಸಿದ್ದ ತಾಯಿ ಭಾರವಾದ ಮನಸ್ಸು ಮತ್ತು ನಿಟ್ಟುಸಿರಿನೊಂದಿಗೆ ಮಗನೆಡೆಗೆ ನೋಡಿ ಬಸ್ಸು ಎಬ್ಬಿಸಿದ ಧೂಳಿನಲ್ಲಿ ಮರೆಯಾಗಿದ್ದಳು.
ಇದನ್ನೆ ಗಮನಿಸುತ್ತಾ ಲೇಖನ ಬರೆಯೋ ಹುಡುಗಿ ಎಲ್ಲಿದ್ದಾಳೆ ಎಂದು ಹುಡುಕಿದಾಗ ಆಗಲೇ ಇನ್ನಾವುದೊ ಅಂಗಡಿಯ ಮುಂದೆ ನಿಂತು ಮುಖಕ್ಕೆ ಹತ್ತಿದ್ದ ಧೂಳನ್ನು ಒರೆಸಿಕೊಳ್ಳುತ್ತಾ ಚೌಕಾಸಿ ಮಾಡುತ್ತಾ ನಿಂತಿರುವಂತೆ ಕಾಣಿಸಿತು. ಅದನ್ನೆ ನೊಡಿ ನಗುಬೇಕು ಅಂದುಕೊಂಡಾಗಲೇ ಏ. . . . .ಮಂಗ ನಿರು ಕೇಳಿ ಎಷ್ಟು ಹೊತ್ತಾಯಿತು ಕೊಡಲೇ . . . . .ಎಂದು ಅದೇ ಹುಷಾರಿಲ್ಲದ ಹುಡುಗನನ್ನು ಹುಡುಗಿಯರು ತನ್ನ ಸುತ್ತ ಇರುವ ಗತ್ತಿನಲ್ಲಿ ದಬಾಯಿಸುತ್ತಿದ್ದ ಸ್ನಾತಕೊತ್ತರ ಪದವಿ ಒದುತ್ತಿರುವ ಯುವಕ ಒಂದೆಡೆ ಕಂಡರೆ , ಇದಾವುದರ ಪರಿವೇ ಇಲ್ಲದೆ ಸಂಜೆಯ ರಂಗಿನಲಿ ತೆಲುತ್ತಿದ್ದ ಹುಡುಗ ಹುಡುಗಿಯರ ದಂಡು ನನ್ನ ಸುತ್ತಾ ನಲಿಯುತ್ತಿತ್ತು. ಅದನ್ನೆ ಯೊಚಿಸುತ್ತಾ ಹಾಸ್ಟೆಲ್ಗೆ ಬಂದು ಮಲಗಿದಾಗ ಏ. . . . . ಎನು ಆಗಲ್ಲ ಬಿಡೆ ಅಮ್ಮ ನಾ ಆಮೇಲೆ ಬರ್ತಿನಿ ನಿ ಹೋಗು ಮಳೆ ಬರ್ತದ ಎಂದು ತಾಯಿಗೆ ಹೇಳಿದ ಆ ಹುಡುಗನ ಮಾತುಗಳು ಯಾಕೊ ಮತ್ತೆ ಮತ್ತೆ ನೆನಾಪಾಗುತ್ತಿದ್ದವು.
ಸುಮ್ಮನೆ ಗಮನಿಸಿ ಇದು ಪ್ರತಿಯೊಂದು ಕಾಲೇಜುಗಳ ಮುಂದೆ ನಡೆತಯವ ಸಾಮಾನ್ಯ ಪ್ರಕ್ರಿಯೇ ಈ ರಿತಿಯ ಸಣ್ಣ ಸಣ್ಣ ವಿಷಯಗಳ ಬಗ್ಗೆ ಯುವ ಜನತೆಯ ಗಮನ ಸೆಳೆದು ಅವರಲ್ಲಿಯು ಶೋಷಿತರ ಸಮಸ್ಯಗಳಿಗೆ ತುಡಿಯುವಂತೆ ಮಾಡುವ ಶಿಕ್ಷಣ ಯಾಕೆ ದೊರೆಯುತ್ತಿಲ್ಲ. ಶಾಲೆ ಕಾಲೇಜುಗಳ ಮುಂದಿರುವ ಪಾನಿಪುರಿ ಮಾರುವ ಹುಡುಗ , ಪೇರಲೇ ಕಾಯಿ ಉಪ್ಪು ಇಟ್ಟುಕೊಂಡು ಕುಳಿತಿರುವ ವಯಸ್ಸಾದ ಅಜ್ಜಿ . ನಾವು ಪ್ರತಿದಿನ ಒಡಾಡುವ ದಾರಿಯಲ್ಲಿ ಕುಳಿತು ಹೋಗಿ ಬರುವವರ ಕಾಲನ್ನೆ ನೋಡುವ ನಮ್ಮದೇ ವಯಸ್ಸಿನ ಚಪ್ಪಲಿ ರಿಪೇರಿ ಅಂಗಡಿಯ ಹುಡುಗ. ಇವರಲ್ಲ ಯಾಕೆ ನಮ್ಮ ಗಮನಕ್ಕೆ ಬರೊಲ್ಲ . ಇಂದಿನ ಜಾಗತಿಕರಣ ಪ್ರರಿತ ಉದ್ಯೊಗ ಮಾರುಕಟ್ಟೆಗೆ ಕೂಲಿಗಳನ್ನು ತಾಯಾರು ಮಾಡುವ ಬರದಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ವಿಧ್ಯಾರ್ಥಿಗಳನ್ನು ಕೇವಲ ನಾಲ್ಕು ಗೊಡೆಗಳ ಪಠ್ಯಕ್ಕೆ ಸಿಮಿತಗೊಳಿಸುತ್ತಿವೆ. ಇದರ ತಿರ್ವ ಪರಿಣಾಮ ನೈತಿಕತೆಯ ನಾಶ. ಬದುಕು ಎಂದರೆ ಕೇವಲ ಉತ್ತಮ ಕೆಲಸ. ಒಂದು ಕಾರು , ನಗರದಿಂದ ೧೦ ಕಿ.ಮಿ ದೊರದಲ್ಲಿ ಒಂದು ಸುಂದರ ಮನೆ. ಮನಕ್ಕೊಪ್ಪುವ ಹೆಂಡತಿ. ಎನ್ನುವ ಹಂತಕ್ಕೆ ನಾವು ಆಗಲೇ ಬಂದಾಗಿದೆ. ಪದವಿ ಒದುತ್ತಿರುವ ಹುಡುಗರನ್ನು ಸುಮ್ಮನೆ ಕೇಳಿ ನೋಡಿ ಜೀವನ ಅಂದರೆ ಎನು ಅಂತ. ಅದರಲ್ಲಿ ತುಂಬಾ ಜನರ ಉತ್ತರ ಒಳ್ಳೆ ಕಂಪೆನಿಯಲ್ಲಿ ಕೆಲಸ , ಮನೆ , ಕಾರು ಇವುಗಳ ಸುತ್ತಲೇ ತಿರುಗುತ್ತಿರುತ್ತದೆ. ಯಾಕೆ ಹೀಗಾಗಿದೆ ಜೀವನ ಅಂದರೆ ನಮ್ಮ ವಯಕ್ತಿಕ ಬದುಕು ಮಾತ್ರವ ? ಆದರಾಚೆಗಿನ ನಮ್ಮ ಸಾರ್ವಜನಿಕ ಬದುಕನ್ನು ಬದುಕು ಎಂದು ಎಕೆ ನಾವು ಸ್ವಿಕರಿಸುತ್ತಿಲ್ಲ.? ಯುವಕರಾಗಿ ನಮ್ಮ ನಿಜವಾದ ತುಡಿತ ಇರಬೇಕಾಗಿರುವುದು ಸಾರ್ವಜನಿಕವಾಗಿ ನಮಗಿರುವ ಜವಬ್ದಾರಿಯ ಮೇಲಲ್ಲವೆ ? ಯಾಕೆ ನಾವು ಅದರಿಂದ ದೊರ ನಿಂತು ಯೊಚಿಸುತ್ತೆವೆ. ಎಕೆಂದರೆ ಇಂದು ನಮಗೆ ಸಿಗುತ್ತಿರುವ ಶಿಕ್ಷಣ ನೈತಿಕತೆಗಿಂತ ಹೆಚ್ಚಾಗಿ ಉದ್ಯೋಗ ಮಾರುಕಟ್ಟೆಯ ಧಣಿಗಳ ಆಸೆಗೆ ಪೊರಕವಾಗುತ್ತಿದೆ. ಇಂದು ನಿಮ್ಮ ಮಗು ಅಮ್ಮ ನಾನು ಇಂಜಿನಿಯರ್ ಆಗುತ್ತೆನೆ. ಡಾಕ್ಟರಿಕೆ ಮಾಡುತ್ತೆನೆ. ಎಂದಾಗ , ಸಂತೊಷದಿಂದ ಹುಚ್ಚಿಗೆ ಬಿದ್ದಂತೆ ಅವುಗಳ ಬಗ್ಗೆ ವಿವರಿಸುವ ನಾವು. ಅದೇ ಮಗು ಮನೆಗೆ ತನ್ನದೆ ವಯಸ್ಸಿನ ಬಿಕ್ಷುಕರು ಬಂದಾಗ ಅಮ್ಮ ಯಾಕಮ್ಮ ಅವರು ಹಿಗಿದ್ದಾರೆ ಎಂದು ಕೇಳಿದಾಗ ಉತ್ತರಿಸಲು ತೊಚದೆ ಅವರೆಲ್ಲ ಮೈಗಳ್ಳರು ಅಂತ ಹೇಳಿ ತಪ್ಪಿಸಿಕೊಳ್ಳುತ್ತೆವೆ. ಹಸಿವು ಬಡತನ , ನೊವು , ಕಣ್ಣಿರು ಇವೆಲ್ಲ ಕೇವಲ ಪುಸ್ತಕದಲ್ಲಿ ತೊರಿಸಿ ಕಲಿಸಲು ಸಾಧ್ಯವಾ ಮಿತ್ರಾ ? ಆದರೆ ಆ ದಿಕ್ಕಿನಲ್ಲಿ ನಾವು ಬಹುದೊಡ್ಡ ಹೆಜ್ಜೆಗಳನ್ನಿಟ್ಟಿದ್ದವೆ. ಆದರ ಹೆಸರೆ ಆಧುನಿಕ ಶಿಕ್ಷಣ. .
